ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದ ಆದೇಶದಂತೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ನಾನೇ ಮಾಡಿಸಿದ್ದೇನೆ ಎಂಬಂತೆ ನನ್ನ ಧ್ಯಾನ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಯಾರಾದರೂ ಕೆಮ್ಮಿದರೂ ಜೋಶಿ ಹೇಳಿದ್ದಾನ ಎಂದು ಕೇಳುತ್ತಾರೆ. ನನ್ನ ಹೆಸರಿನ ಬದಲು ದೇವರ ಧ್ಯಾನ ಮಾಡಿದ್ದರೆ ಸ್ವಲ್ಪ ಸುಧಾರಿಸುತ್ತಿದ್ದರು’ ಎಂದು ಮಾತಿನಲ್ಲೇ ತಿವಿದರು.