ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದರ ಸಾಕಾರಕ್ಕೆ ಅನುದಾನವನ್ನು ಸಹ ನೀಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನ ಯಶಸ್ವಿಯಾಗಬೇಕು. ಆಟೊ ಟಿಪ್ಪರ್ಗಳು ಕಾರ್ಯಾರಂಭ ಮಾಡಿದ ನಂತರ ತುಂಬ ಸುಧಾರಣೆಯಾಗಿದೆ. ರಾಗಿಣಿ ಅವರಂತಹ ಜನಪ್ರಿಯ ನಟಿ ಅವರು ರಾಯಭಾರಿಯಾದರೆ ಈ ಅಭಿಯಾನಕ್ಕೆ ಇನ್ನಷ್ಟು ಬಲ ಬರಲಿದೆ ಎಂದರು.