‘ಆ ಜಾಗದಲ್ಲಿದ್ದ 8 ಮಂದಿ, ನಮ್ಮನ್ನು ಸುತ್ತುವರಿದಿದ್ದರು. ನಂತರ, ರಾಂಪುರ ಬಳಿಯ ಚಹಾ ಅಂಗಡಿಗೆ ಕರೆದೊಯ್ದಿದ್ದರು. ಅಲ್ಲಿಗೆ ಬಂದಿದ್ದ ಮಾರುತಿ ಸ್ವಿಫ್ಟ್ ಕಾರಿನಲ್ಲೇ ನಮ್ಮನ್ನು ಅಪಹರಿಸಿಕೊಂಡು ಮಾವಿನ ತೋಟವೊಂದಕ್ಕೆ ಹೋಗಿದ್ದರು. ಪ್ಲಾಸ್ಟಿಕ್ ಪೈಪ್ಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳು, ನಮ್ಮ ಚಿನ್ನಾಭರಣ, ಮೊಬೈಲ್ಗಳನ್ನು ಕಿತ್ತುಕೊಂಡಿದ್ದರು. ನಂತರ, ಅದೇ ಕಾರಿನಲ್ಲಿ ನಮ್ಮನ್ನು ಬಿದರಹಳ್ಳಿ ಬಳಿ ರಾತ್ರಿ 11.30 ಗಂಟೆ ಸುಮಾರಿಗೆ ಬಿಟ್ಟು ಹೋದರು’ ಎಂದು ಹೇಳಿದ್ದಾರೆ.