ಲಕ್ಷ್ಮಿ ಅವರು 12 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ಅವರು ಮಾಡುತ್ತಿದ್ದರು. ಆದರೆ ಕಾರ್ಮಿಕರ ಸುರಕ್ಷತೆಗೆ ನೀಡಬೇಕಾಗಿದ್ದ ಮುಖಗವಸು, ಕೈಗವಸು ಗುತ್ತಿಗೆದಾರರಾಗಲಿ, ಇಲಾಖೆಯಾಗಲಿ ನೀಡಿರಲಿಲ್ಲ. ರಾಸಾಯನಿಕ ಬಳಕೆ ಮಾಡಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಪರಿಣಾಮ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.