‘ಮೂವರು ಬಾಲಕರು ವಾರದ ಹಿಂದೆ ಶಾಲೆಯಿಂದ ಮನೆಗೆ ಬರುವಾಗ ಮೂರು ನಾಯಿಮರಿಗಳಿಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು. ಅವುಗಳನ್ನು ಮೇಲಿನಿಂದ ಕೆಳಕ್ಕೆ ಬಿಸಾಡುತ್ತಿದ್ದರು. ಅಷ್ಟಕ್ಕೇ ಅವರ ಕೃತ್ಯ ನಿಂತಿರಲಿಲ್ಲ. ಆ ನಾಯಿಮರಿಗಳನ್ನು ಬೆಂಕಿಗೂ ಹಾಕಿದ್ದರು. ಎರಡು ನಾಯಿಮರಿಗಳು ಬೆಂಕಿಯ ತಾಪ ತಡೆಯದೇ ಸತ್ತಿವೆ. ಒಂದು ನಾಯಿ ಮರಿ ಹೇಗೋ ಬದುಕುಳಿದಿದೆ’ ಎಂದು ರಾಮ್ ಕುಮಾರ್ ಬಿ.ಕೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.