ಲೋಕಸಭಾ ಚುನಾವಣೆಯಲ್ಲಿ 10ರಿಂದ 40 ಸ್ಥಾನಗಳನ್ನಷ್ಟೇ ಪಡೆಯಲಿರುವ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಅವರಂತಹ ನಾಯಕರು ಸಹ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಕನಿಷ್ಠ 15 ನಾಯಕರು ಪ್ರಧಾನಿಯಾಗಲು ಹವಣಿಸುತ್ತಿದ್ದಾರೆ. ಆದರೆ, ದೇಶ ಸುಭದ್ರವಾಗಿರಬೇಕು. ಹೀಗಾಗಿ, ಸುಭದ್ರ ಸರ್ಕಾರ ಬೇಕು. ದೇಶದ ಪರ ಗಟ್ಟಿ ನಿರ್ಧಾರ ಕೈಗೊಳ್ಳುವ ನಾಯಕರು ಬೇಕು. ಅಂತಹ ನಾಯಕತ್ವ ಗುಣ ಇರುವುದು ಮೋದಿ ಅವರಿಗೆ ಮಾತ್ರ’ ಎಂದು ಹೇಳಿದರು.