ಶಾಂತಿನಗರ ವ್ಯಾಪ್ತಿಯಲ್ಲಿ ವಾಸವಿದ್ದ ರಾಹುಲ್ ದ್ರಾವಿಡ್ ಕುಟುಂಬ ಈಗ ಮತ್ತಿಕೆರೆ ವ್ಯಾಪ್ತಿಯ ಅಶ್ವತ್ಥನಗರಕ್ಕೆ ಸ್ಥಳಾಂತರಗೊಂಡಿದೆ. ದ್ರಾವಿಡ್ ಸಹೋದರ ಶಾಂತಿನಗರ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಫಾರ್ಮ್–7 ನೀಡಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿದ್ದಾರೆ. ಅದರಂತೆ ಹೆಸರು ಕೈಬಿಡಲಾಗಿದೆ ಎಂದು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ತಿಳಿಸಿದರು.