ಬೆಂಗಳೂರು: ಚುನಾವಣಾ ಆಯೋಗದ ರಾಯಭಾರಿಯೂ ಆಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ(ಇಸಿಐ) ವರದಿ ಕಳುಹಿಸಲಾಗಿದೆ.
ಈಗ ಹೆಸರು ಸೇರಿಸಲು ಸಾಧ್ಯವೋ ಇಲ್ಲವೋ ಎಂಬುದನ್ನು ಆಯೋಗ ತೀರ್ಮಾನಿಸಲಿದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ ಹೇಳಿದರು.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ದ್ರಾವಿಡ್ ಅವರ ಮನೆಗೆ ಸೋಮವಾರ ತೆರಳಿ ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿ ಆಯೋಗಕ್ಕೆ ಸಲ್ಲಿಸಿದರು.