‘ಬುಧವಾರ ಸಂಜೆ5.15ರ ಸುಮಾರಿಗೆ ಎರಡು ನಿಲ್ದಾಣಗಳ ನಡುವೆ ವಿದ್ಯುತ್ ಮಾರ್ಗದಲ್ಲಿ ದೋಷ ಕಂಡು ಬಂತು.ಕೂಡಲೇ ಅಧಿಕಾರಿಗಳ ತಂಡ ದೋಷ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತು. ಯಶವಂತಪುರ ಯಾರ್ಡ್ ಬಳಿಯ ವಿದ್ಯುತ್ ತಂತಿಯ ಮೇಲೆ ಕೊಂಬೆ ಬಿದ್ದಿತ್ತು. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅದನ್ನು ತೆರವುಗೊಳಿಸಿ 6.10ರ ವೇಳೆಗೆ ಸಮಸ್ಯೆ ಸರಿಪಡಿಸಲಾಯಿತು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ‘ಮೈಸೂರು–ಬೆಂಗಳೂರು ರಾಜ್ಯರಾಣಿ ಎಕ್ಸ್ಪ್ರೆಸ್, ಮೈಸೂರು ಕಾಚಿಗುಡ ಎಕ್ಸ್ಪ್ರೆಸ್, ಗೋಲಗುಂಬಜ್ ಎಕ್ಸ್ಪ್ರೆಸ್, ಮೈಸೂರು– ಮೈಲಾಡುತುರೈ ಎಕ್ಸ್ಪ್ರೆಸ್ ಸೇರಿ ಹಲವು ರೈಲುಗಳು ವಿಳಂಬವಾಗಿ ಚಲಿಸಿದವು’ ಎಂದು ಹೇಳಿದರು.