ಘಟಿಕೋತ್ಸವ ಭಾಷಣ ಮಾಡಿದ ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್, ‘ಉತ್ತಮ ಕಾರ್ಯಗಳಿಗೆ ವಯಸ್ಸಿನ ಹಂಗಿಲ್ಲ. ಸಾಮರ್ಥ್ಯವಿರುವವರೆಗೂ ಉತ್ತಮ ಕೆಲಸಗಳನ್ನು, ಸಾಧನೆಗಳನ್ನು ಮಾಡುತ್ತಲೇ ಇರಬೇಕು.ಮಾನವನ ಕಲ್ಪನಾ ಸಾಮರ್ಥ್ಯ, ಶಕ್ತಿ ಹಾಗೂ ಸಾಧನೆಗಳಿಗೆ ಇತಿಮಿತಿಗಳಿಲ್ಲ. ಹಾಗಾಗಿ, ಅಂದುಕೊಂಡದ್ದನ್ನು ಸಾಧಿಸುವ ತನಕ ವಿರಮಿಸದಿರಿ’ ಎಂದರು.