ನದಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದುಮತ್ತು ನದಿಗಳಪುನಶ್ಚೇತನಕ್ಕೆ ಸಮಗ್ರ ಯೋಜನೆ ಒದಗಿಸುವ ಉದ್ದೇಶದೊಂದಿಗೆ 2017ರ ಸೆಪ್ಟೆಂಬರ್ನಲ್ಲಿ ತಮಿಳುನಾಡಿನ ಕೊಯಮತ್ತೂರಿನಿಂದ ರ್ಯಾಲಿಯನ್ನು ಪ್ರಾರಂಭಿಸಲಾಗಿತ್ತು. ಸುಮಾರು 162 ಮಿಲಿಯನ್ ಜನ ಭಾಗವಹಿಸಿದ್ದರು. ಅಕ್ಟೋಬರ್ 2ರಂದು ದೆಹಲಿಯಲ್ಲಿ ರ್ಯಾಲಿಕೊನೆಗೊಂಡಿತ್ತು. ಈ ಮೂಲಕ ಅದುಅತಿದೊಡ್ಡ ಪರಿಸರ ಚಳುವಳಿ ಎನ್ನುವ ಕೀರ್ತಿಗೆ ಪಾತ್ರವಾಗಿತ್ತು.