ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಯ್ಯ ಬಡಾವಣೆ: ಸಂಭ್ರಮದ ಎನ್ಕೆಕೆ ಹಬ್ಬ-2019

Last Updated 11 ಫೆಬ್ರುವರಿ 2019, 19:31 IST
ಅಕ್ಷರ ಗಾತ್ರ

ಪೀಣ್ಯದಾಸರಹಳ್ಳಿ: 'ಗುರಿ ಇಲ್ಲದವನು ಏನೂ ಸಾಧಿಸಲಾರ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗುರಿ ಮುಟ್ಟುವುದು ಸುಲಭ' ಎಂದು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಜ್ಞಾನಪ್ರಕಾಶ್ ಹೇಳಿದರು.

ಎಂ.ಎಸ್.ರಾಮಯ್ಯ ಬಡಾವಣೆಯ ಸರ್ವೋದಯ ಕಲಾನಿಕೇತನ ಸಮಿತಿ ಹಾಗೂ ಎನ್ಕೆಕೆ ಡ್ಯಾನ್ಸ್‌ ಅಕಾಡೆಮಿಯ 'ಎನ್ಕೆಕೆ ಹಬ್ಬ-2019' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಮನುಷ್ಯ ಏನನ್ನೇ ಕಂಡುಹಿಡಿದರೂ ಆಯಸ್ಸನ್ನು ಕಂಡುಹಿಡಿಯಲಿಲ್ಲ. ಅದಕ್ಕಾಗಿ ನಮ್ಮ ಆರೋಗ್ಯವನ್ನು ನಾವು ನೃತ್ಯ, ಯೋಗ, ಧ್ಯಾನಗಳಿಂದ ವೃದ್ಧಿಸಿಕೊಳ್ಳಬೇಕು' ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಕಿರಣ್ 'ನಮ್ಮ ಈ ನೃತ್ಯ ಅಕಾಡೆಮಿಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳಿಂದ ಇಂದು ಕಿರುತೆರೆ, ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೂ ಮಾದರಿಯಾಗುತ್ತಿದ್ದಾರೆ' ಎಂದರು.

ಸಮಾರಂಭದಲ್ಲಿ ಕಲಾನಿಕೇತನ ಸಂಸ್ಥಾಪಕಿ ಪುಷ್ಪಲತಾ ರಾಮಚಂದ್ರ, ಚಿತ್ರನಟಿ ಕಲ್ಪನಾ, ಕನ್ನಡ ಸಾಹಿತ್ಯ ಪರಿಷತ್‌ ದಾಸರಹಳ್ಳಿ ಘಟಕದ ಅಧ್ಯಕ್ಷ ವೈಬಿಎಚ್ ಜಯದೇವ್, ಗೋವಿಂದರಾಜು, ವಿನೋದ್‌ಗೌಡ ಇದ್ದರು.ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT