ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ‘ಸಂಘಕ್ಕಾಗಿ ಅನೇಕ ಪ್ರಚಾರಕರು ನಂದಾದೀಪಗಳಂತೆ ಬೆಳಕು ನೀಡಿದ್ದಾರೆ. ಒಂದು ಧ್ಯೇಯವನ್ನು ಇರಿಸಿಕೊಂಡು ಗಂಧದಂತೆ ಬದುಕು ತೇಯುವ ಪ್ರಚಾರಕರು ಸಫಲತೆಗಿಂತ ಹೆಚ್ಚಾಗಿ ಸಾರ್ಥಕ್ಯ ಕಾಣುತ್ತಾರೆ. ಬಾಬೂರಾವ್ ಅವರೂ ಜೀವನವನ್ನು ತಿಳಿನೀರಿನ ಹಾಗೆ ಇಟ್ಟು ಕೊಂಡು ಬದುಕುತ್ತಿದ್ದಾರೆ’ ಎಂದರು.