ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ ತೆರೆಯದಂತೆ ಸಿ.ಎಂಗೆ ಮನವಿ

Last Updated 17 ಜನವರಿ 2019, 18:48 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ್‌ ಬಿಮಾನಗರದ ಎಚ್ಎಎಲ್‌ ಮೂರನೇ ಹಂತದ ಎನ್‌ಎಎಲ್‌ ವಸತಿಗೃಹದ ಸಮೀಪ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಇದು ಜನವಸತಿ ಪ್ರದೇಶವಾಗಿದ್ದು, ಶಾಲಾ ಕಾಲೇಜುಗಳಿವೆ. ಸಮೀಪದಲ್ಲೇ ಚರ್ಚ್ ಸಹ ಇದೆ. ಜತೆಗೆ ವಿಜ್ಞಾನಿಗಳು ಹಾಗೂ ಹಿರಿಯ ನಾಗರಿಕರು ಎನ್‌ಎಎಲ್‌ ವಸತಿಗೃಹದಲ್ಲಿ ನೆಲೆಸಿದ್ದು, ಮದ್ಯದಂಗಡಿ ತೆರೆದರೆ ಜನರ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಅಬಕಾರಿ ಇಲಾಖೆಗೆ ನಿರ್ದೇಶನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT