ಕೆರೆಯಲ್ಲಿ ನೀರು ತುಂಬಿದರೆ ವರ್ಷವಿಡೀ ಕೆರೆಯ ಕೆಳಗಿನ ತೋಟಗಳಿಗೆ ನೀರುಣಿಸಲಾಗುತ್ತಿದೆ. ಅಡಿಕೆ, ತೆಂಗಿನ ಮರಗಳ ಜತೆಗೆ ಸಮೃದ್ದವಾಗಿ ಭತ್ತ, ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಕೆರೆಯಲ್ಲಿನ ಮರಳು, ಮಣ್ಣನ್ನು ಖಾಸಗಿ ಇಟ್ಟಿಗೆ ತಯಾರಕರು ಅಕ್ರಮವಾಗಿ ತೆಗೆದು ಸಾಗಿಸಿ, ಕೆರೆಯ ವಿನಾಶಕ್ಕೆ ಕಾರಣವಾಗಿದ್ದಾರೆ. ಆದರೂ ಅರಣ್ಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿ, ನೀರಾವರಿ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.