ಬೆಂಗಳೂರು: ಬಾಪೂಜಿನಗರದ ಎನ್.ವೆಂಕಟೇಶ್ ಎಂಬುವರು, ಮನೆಯೊಳಗೆ ಸೆಕೆ ಎಂಬ ಕಾರಣಕ್ಕೆ ಮಂಗಳವಾರ ರಾತ್ರಿ ಪತ್ನಿ–ಮಕ್ಕಳ ಜತೆ ಮಹಡಿಯಲ್ಲಿ ಮಲಗಿದ್ದರು. ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಕಟ್ಟಡ ಜಿಗಿದು ಬಂದ ಕಳ್ಳರಿಬ್ಬರು, ಮನೆಯ ಬೀಗ ಮುರಿದು ಅಲ್ಮೆರಾದಲ್ಲಿದ್ದ ₹ 50 ಸಾವಿರ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.