ಪತ್ರಕರ್ತ ಇಂದೂಧರ ಹೊನ್ನಾಪುರ,‘ರಾಜಕೀಯವು ಸಂಸ್ಕೃತಿ, ಇತಿಹಾಸ, ಧರ್ಮದ ಹೆಸರನ್ನು ಹೇಳಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯ ಕೇಳುವವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದ್ದರೂ ಪ್ರಶ್ನಿಸುವ ನೈತಿಕತೆ ದೂರವಾಗುತ್ತಿದೆ. ನ್ಯಾಯಾಲಯಗಳು ನೊಂದ ಜನರಿಗೆ ತುರ್ತಾಗಿ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ಕೆಲಸ ಮಾಡುತ್ತಿದ್ದರೂ, ನ್ಯಾಯಾಲಯದ ದಿಕ್ಕು ತಪ್ಪಿಸುವಲ್ಲಿ ರಾಜಕೀಯದ ಪಾತ್ರ ಕಂಡುಬರುತ್ತಿದೆ’ ಎಂದರು.