ಬಿಜೆಪಿ ವರಿಷ್ಠರಿಗೆ ₹1800 ಕೋಟಿ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಕಾಂಗ್ರೆಸ್–ಜೆಡಿಎಸ್ ಸಮಾವೇಶದಲ್ಲಿ ಆರೋಪಿಸಿದ್ದರು. ಈ ಸಂಬಂಧ ಸೋಮವಾರ ಪ್ರಕಟಣೆ ನೀಡಿರುವ ಕೃಷ್ಣ, ‘ಈ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೂ, ರಾಹುಲ್ ಗಾಂಧಿ ಸುಳ್ಳನ್ನು ಮತ್ತೆ ಹೇಳುತ್ತಿದ್ದಾರೆ. ದೇಶದ ಹಳೆಯ ಪಕ್ಷದ ನಾಯಕರಿಗೆ ಈ ಹೇಳಿಕೆ ಶೋಭೆ ತರುವಂತಹುದು ಅಲ್ಲ’ ಎಂದು ಟೀಕಿಸಿದ್ದಾರೆ.