‘ಮುಂದಿನ ಪೀಳಿಗೆಗೆ ನೀರು, ನೆರಳು, ಸಮೃದ್ಧ ವಾತಾವರಣ ಸಿಗಲು ಪರಿಸರದ ಉಳಿವು ಅತಿಮುಖ್ಯ. ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಯ ಅಂಗಳ, ಶಾಲಾ ಆವರಣ, ದೇವಸ್ಥಾನ ಹಾಗೂ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟರೆ ನೆರಳು ಸಿಗುತ್ತದೆ. ಅಲ್ಲದೆ ಪ್ರಾಣಿಪಕ್ಷಿಗಳು ಗೂಡು ಕಟ್ಟಿಕೊಂಡು ಅಶ್ರಯ ಪಡೆಯಲು ನೆರವಾಗುತ್ತದೆ’ ಎಂದರು.