ಬೆಂಗಳೂರು: ‘ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದರ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ’ ಎಂದು ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಹೇಳಿದರು.
ದೇವಾಲಯ ಪ್ರವೇಶಕ್ಕೆ 10ರಿಂದ 50 ವರ್ಷದ ಮಹಿಳೆಯರಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸಮನ್ವಯ ಮತ್ತು ಅಯ್ಯಪ್ಪ ಸಮಿತಿ ವತಿಯಿಂದ ಕಾಡುಗೋಡಿಯಲ್ಲಿ ಶಾಂತಿಯುತ ಯಾತ್ರೆ ಮಾಡಲಾಯಿತು.
‘ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯಕ್ಕೆ ಮಹಿಳೆಯರೂ ಹೋಗಬಹುದು ಎಂದು ಹೇಳಿರುವುದರಿಂದ ಹಿಂದೂಗಳ ಭಾವನೆ, ಸಂಪ್ರದಾಯ, ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ’ ಎಂದು ಹೇಳಿದರು.