ಗ್ರಾಮ ಸೇವಾ ಸಂಘವು ‘ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದುಡಿಯುವ ವರ್ಗದಲ್ಲಿ ಶೇ 90ರಷ್ಟಿರುವ ಅಸಂಘಟಿತ ಕಾರ್ಮಿಕರ ಶಕ್ತಿಯನ್ನು ಬದಿಗೆ ತಳ್ಳಲಾಗುತ್ತಿದೆ. ರಾಜಕೀಯ ಅಧಿಕಾರವೇ ಪ್ರಮುಖವಾಗಿದೆ. ಸುಸ್ಥಿರ ಆರ್ಥಿಕ ನೀತಿ ರೂಪಿಸಲು ಕಾರ್ಮಿಕ ಸಂಘಟನೆಗಳು, ರೈತ ಸಂಘಗಳು ಒಟ್ಟಿಗೆ ಹೋರಾಡಬೇಕಾದ ಸಮಯ ಬಂದಿದೆ.ಪವಿತ್ರ ಆರ್ಥಿಕತೆಗಾಗಿ ಎಲ್ಲರೂ ಹೋರಾಡಿ, ಗೆಲ್ಲಬೇಕಾಗಿದೆ’ ಎಂದರು.