ಬೆಳಗಾವಿ: ಭಾರತೀಯ ಕುಟುಂಬ ಯೋಜನಾ ಸಂಘ (ಎಫ್ಪಿಎಐ) ಬೆಳಗಾವಿ ಶಾಖೆಯಿಂದ ಗುರುವಾರ ‘ವಿಶ್ವ ಸುರಕ್ಷಿತ ತಾಯ್ತನ ದಿನ’ ಆಚರಿಸಲಾಯಿತು.
ಉದ್ಘಾಟಿದ ಶಾಖೆಯ ಉಪಾಧ್ಯಕ್ಷೆ ಶೋಭಾ ಎಸ್. ಕುಲಕರ್ಣಿ ಮಾತನಾಡಿ, ‘ದೇಶದಾದ್ಯಂತ ವಿಶ್ವ ಸುರಕ್ಷಿತ ತಾಯ್ತನ ದಿನ ಆಚರಿಸುವುದು ಹೆಮ್ಮೆಯ ವಿಷಯ. ಈ ಕುರಿತು ಜನರಲ್ಲಿ ಅರಿವು ಕಡಿಮೆ ಇದೆ’ ಎಂದರು.
‘ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಹಲವು ದುಷ್ಪರಿಣಾಮಗಳು ಉಂಟಾಗುತ್ತವೆ’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸ್ತ್ರೀರೋಗ ತಜ್ಞೆ ಡಾ.ವೈಶಾಲಿ ಕಿತ್ತೂರು, ‘ಕುಟುಂಬ ಬೆಳೆಸುವುದು ತಾಯಿಯ ಜವಾಬ್ದಾರಿ. ಹೀಗಾಗಿ, ಹೆಣ್ಣು ಮಕ್ಕಳು ಸದೃಢವಾಗಿರಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು’ ಎಂದು ಹೇಳಿದರು.
ಎಫ್ಪಿಎಐ ಬೆಳಗಾವಿ ಶಾಖೆಯ ವೈದ್ಯಾಧಿಕಾರಿಗಳಾದ ಡಾ.ಆರತಿ ಎ. ಕುಲಕರ್ಣಿ, ಡಾ.ನಮ್ರತಾ ಮಿಸಾಳೆ ಮಾತನಾಡಿದರು.