ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ‘ಶಿಕ್ಷಣ ಪಡೆದಂತೆ ಜಾತಿ ಆಚರಣೆ ಹೆಚ್ಚುತ್ತಿದೆ. ನೀರು, ಗಾಳಿ, ಭೂಮಿಗೆ ಜಾತಿಯಿಲ್ಲ. ಅವುಗಳಂತೆ ನಾವು ಕೂಡ ಜಾತಿ ಎಂಬ ಭೂತ ಪ್ರಜ್ಞೆ ಯಿಂದ ಹೊರ ಬರಬೇಕು. ಜಾತೀಯತೆ ಮತ್ತು ಭ್ರಷ್ಟಾಚಾರದ ವಿಚಾರಗಳಲ್ಲಿ ಮೊದಲು ಬದಲಾಗಬೇಕು. ಸಮಾಜದ ಬದಲಾವಣೆ ಬಯಸುವ ಮೊದಲು ನಾವು ಬದಲಾಗಬೇಕು’ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಚಿಂತಕ ಗಂಗಾಧರ್ ಬಹುಜನ್ ಇದ್ದರು.