ಪ್ರಜಾವಾಣಿಯ ನ. 13ರ ಸಂಚಿಕೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ, ನ. 14ರಂದು ದಲಿತರ ಮೇಲಿನ ದೌರ್ಜನ್ಯ ನಗರದಲ್ಲೇ ಹೆಚ್ಚು ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಈ ಬಗ್ಗೆ ನಗರದ ಯಾವುದೇ ದಲಿತಪರ ಸಂಘಟನೆಗಳು, ಮಾಧ್ಯಮಗಳು ಧ್ವನಿಯೆತ್ತದಿರುವುದು ಕಳವಳಕಾರಿ. ಮುಖ್ಯಮಂತ್ರಿ ಕೂಡಾ ಈ ಬಗ್ಗೆ ಮಾತನಾಡಿಲ್ಲ. ದಲಿತ ಸಮುದಾಯದವರೇ ಆದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರೂ ಮಾತನಾಡುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.