ಆರೋಪಿ ಆರು ತಿಂಗಳ ಹಿಂದೆ ಈ ಮಂದಿರದಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ. ಭಾನುವಾರ ಮಹಿಳೆಯೊಬ್ಬರು ಪ್ರಾರ್ಥನೆಗೆ ಬಂದಿದ್ದಾಗ ಅವರನ್ನು ತಬ್ಬಿಕೊಂಡ ಆತ, ‘ಯಾರಾದರೂ ಹತ್ತಿರ ಬಂದರೆ ಈಕೆಯನ್ನು ಸಾಯಿಸುತ್ತೇನೆ’ ಎಂದು ಚಾಕು ತೋರಿಸಿ ಬೆದರಿಸಿದ್ದ. ಈ ಹಂತದಲ್ಲಿ ಮಹಿಳೆಯ ರಕ್ಷಣೆಗೆ ಧಾವಿಸಿದ ಸಂಪತ್ ಅವರ ಮುಖಕ್ಕೆ ಗುದ್ದಿದ ಜೂಲಿಯನ್, ‘ಈ ವಿಚಾರಕ್ಕೆ ತಲೆ ಹಾಕಬೇಡಿ’ ಎಂದು ಕೂಗಾಡಿದ್ದ. ಕೊನೆಗೆ ಸಂಪತ್ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.