ಏನಿದು ಅರ್ಜಿ?: ‘ಮೆಜೆಸ್ಟಿಕ್ಗೆ ಹೊಂದಿಕೊಂಡಂತಿರುವ ಓಕಳೀಪುರಂ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ₹200 ಕೋಟಿ ವೆಚ್ಚದಲ್ಲಿ ಕಾರಿಡಾರ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೈಲ್ವೆ ಸಚಿವಾಲಯ ಹಾಗೂ ಪಾಲಿಕೆ ಜಂಟಿಯಾಗಿ ಇದನ್ನು ಕೈಗೊಂಡಿವೆ. ಆದರೆ, ಇಲ್ಲಿನ ಶನಿಮಹಾತ್ಮ ದೇವಾಲಯದಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.