‘ಕೆಂಗೇರಿಯ ಕೋಟೇಶ್ವರ್, ಕತ್ರಿಗುಪ್ಪೆ ನಿವಾಸಿಯಾದ ತನ್ನ ಸ್ನೇಹಿತ ಸುರೇಶ್ ಜತೆ ಇತ್ತೀಚೆಗೆ ಜಗಳ ಮಾಡಿಕೊಂಡಿದ್ದ. ಸಂಧಾನದ ನೆಪದಲ್ಲಿ ಬುಧವಾರ ರಾತ್ರಿ ಆತನನ್ನು ಮೆಜೆಸ್ಟಿಕ್ಗೆ ಕರೆಸಿಕೊಂಡ ಸುರೇಶ್, ಸಹಚರರೊಂದಿಗೆ ಸೇರಿ ಆಟೊದಲ್ಲಿ ತೋಟದ ರಸ್ತೆಗೆ ಕರೆದೊಯ್ದು ಕೊಲೆಗೈದಿದ್ದಾನೆ’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.