ಇದೇ 17ರಂದು ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿ ಚಂದುಸಾ ಹೋಟೆಲ್ ಬಳಿ ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಗಣೇಶ್ ಅವರನ್ನು ಒಂದೇ ಬೈಕ್ನಲ್ಲಿ ಬಂದ ಸೀನ ಮತ್ತು ಆತನ ಸಹಚರರು ಲಾಂಗ್ ಬೀಸಿ ಕೊಲೆ ಮಾಡಿ, ನಂತರ ಸ್ವಲ್ಪ ದೂರ ಹೋಗಿಅಂಗಡಿ ಬಾಗಿಲು ಹಾಕಿ ನಿಂತಿದ್ದ ಮಾಲೀಕನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಉತ್ತರ ವಿಭಾಗದ ಡಿಸಿಪಿಶಶಿಕುಮಾರ್ ಅವರು ಕೊಲೆ ಆರೋಪಿಗಳನ್ನು ಬಂಧಿಸಲು ಮಲ್ಲೇಶ್ವರಂ ಮತ್ತು ವೈಯಾಲಿಕಾವಲ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ಎರಡು ಪ್ರತ್ಯೇಕ ತಂಡ
ಗಳನ್ನು ರಚಿಸಿದ್ದರು. ಸೀನನ ಬಂಧನಕ್ಕೆ ಬೆನ್ನು ಬಿದ್ದ ಈ ತಂಡಗಳು, ಗಂಗೊಂಡನಹಳ್ಳಿ ಮುಖ್ಯ ರಸ್ತೆಯ ತಿಪ್ಪೇನಹಳ್ಳಿ ಬಳಿಗುರುವಾರ ಮಧ್ಯಾಹ್ನ ಆತ ಓಡಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು.