‘ಡಿ.11ರಂದು ಠಾಣೆಗೆ ತೆರಳಿ ಪೊಲೀಸರಿಗೆ ದೂರು ಕೊಟ್ಟೆವು. ಅವರು ಪ್ರಾಂಶುಪಾಲರನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಆದರೆ, ಮರುದಿನವೂ ಅದೇ ವರ್ತನೆ ಮುಂದುವರಿಯಿತು. ನನ್ನ ಮಗನೊಂದಿಗೆ ಮಾತನಾಡದಂತೆ, ಒಟ್ಟಿಗೆ ಕುಳಿತು ಊಟ ಮಾಡದಂತೆ ಇತರೆ ಮಕ್ಕಳಿಗೆ ಸೂಚಿಸಿದ್ದಾರೆ. ಇದರಿಂದ ತುಂಬ ನೋವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.