ಬೆಂಗಳೂರು: ಕಾಂಗ್ರೆಸ್ ಶಾಸಕರು ಕೆಪಿಸಿಸಿ ಕಚೇರಿಯಿಂದ ಖಾಸಗಿ ಬಸ್ ಮೂಲಕ ರೆಸಾರ್ಟ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ಯಲಾಗುತ್ತಿದೆ. ಇದಕ್ಕೂ ಮುನ್ನ ಶಾಸಕರು ರಾಜಭವನಕ್ಕೆ ತೆರಳಿದ್ದರು. ಬಳಿಕ ಕೆಪಿಸಿಸಿ ಕಚೇರಿಗೆ ಮರಳಿ ಸಭೆಯಲ್ಲಿ ಭಾಗಿಯಾಗಿದ್ದರು.
'ಹೊಟೇಲ್ ಅಥವಾ ಎಲ್ಲಿಗೂ ಹೋದರೂ ಎಲ್ಲ ಶಾಸಕರೂ ಜೊತೆಯಲ್ಲಿಯೇ ಇರುತ್ತಾರೆ ಹಾಗೂ ವಿಚಾರಗಳನ್ನು ಚರ್ಚಿಸುತ್ತಾರೆ. ಕುದುರೆ ವ್ಯಾಪಾರ ಶುರು ಮಾಡಿರುವುದರಿಂದ ಕಾಂಗ್ರೆಸ್ ತಮ್ಮ ಶಾಸಕರನ್ನು ಒಟ್ಟಿಗೆ ಸೇರಿಸುವ ಕ್ರಮ ವಹಿಸಿದೆ’ ಎಂದು ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.
Hotel or wherever we go, MLAs will stay together and discuss things. Congress is compelled to keep its MLAs together because of the horse-trading going on: Ashok Gehlot at KPCC, Bengaluru #KarnatakaElectionResults2018pic.twitter.com/EuyyyYqVLz