ಶ್ರೀವಾರಿ ಫೌಂಡೇಷನ್ನ ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಿತು. ಇದು 500ನೇ ಕಲ್ಯಾಣೋತ್ಸವ ಎಂಬುದು ವಿಶೇಷತೆಯಾಗಿದೆ. ವಿಚಾರಣಾಕರ್ತರು ರಘೋತ್ತಮರಾವ್, ವ್ಯವಸ್ಥಾಪಕ ಶಾನಮಾಚಾರ್ಯರಾಯಸ್ತ, ಅರ್ಚಕರಾದ ಗುರಾಚಾರ್ಯ ಸಾಮಗ, ಧರ್ಮಾಧಿಕಾರಿ ಶ್ರೀರಂಗ ಹನಮ, ಸಾಗರ, ರಘುವೀರ ಆಚಾರ್ಯ, ಬಿಂಧು ಮಾಧವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.