‘ಗಾಂಧೀಜಿ-ಅಂಬೇಡ್ಕರ್, ನೆಹರೂ-ಪಟೇಲ್, ಗಾಂಧಿ–ನೆಹರೂ ಪರಸ್ಪರ ಸೈದ್ಧಾಂತಿಕ ವಿರೋಧಿಗಳಾಗಿದ್ದರು. ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದರು. ಇವರೆಲ್ಲರೂ ಅವರದೇ ಆದ ವಿಚಾರಗಳ ಮೂಲಕ ದೇಶದ ಒಳಿತಿಗಾಗಿ ಹೋರಾಡಿದವರು. ಗಾಂಧಿ ಮತ್ತು ಅಂಬೇಡ್ಕರ್, ಇವರಲ್ಲಿ ಒಬ್ಬರು ಪ್ರಾಮಾಣಿಕರು, ಇನ್ನೊಬ್ಬರು ಅಪ್ರಾಮಾಣಿಕರು ಎಂಬಂತೆ ಬಿಂಬಿಸಿ, ಸಿನಿಮಾದಲ್ಲಿ ಕಂಡು ಬರುವ ನಾಯಕ, ಖಳನಾಯಕರ ಪಾತ್ರಗಳಲ್ಲಿ ಅವರನ್ನು ಕಾಣುತ್ತಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅವಲೋಕಿಸದೆ ಸುಖಾಸುಮ್ಮನೆ ಟೀಕಿಸುವುದೂ ಸರಿಯಲ್ಲ’ ಎಂದು ಹೇಳಿದರು.