ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ, ‘ವೈಟ್ಫೀಲ್ಡ್–ಹೊಸೂರು, ಹೊಸೂರು–ಯಶವಂತಪುರ, ಬೆಂಗಳೂರು ನಗರ–ಬೈಯಪ್ಪನಹಳ್ಳಿ, ಬೆಂಗಳೂರು ನಗರ–ಕೆಂಗೇರಿ... ಹೀಗೆ ಕಡಿಮೆ ಅಂತರದ ಮಾರ್ಗಗಳ ನಡುವೆ ರೈಲು ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು. ಅದರ ಆಧಾರದ ಮೇಲೆಯೇ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಆದರೆ, ರಾಜ್ಯ ಸರ್ಕಾರ ರೈಲು ಸೇವೆಯನ್ನು ಹತ್ತಿರದ ನಗರಗಳಿಗೆ ವಿಸ್ತರಿಸಬೇಕು ಎಂಬ ಪ್ರಸ್ತಾವ ಮುಂದಿಟ್ಟಿದೆ. ಸರ್ಕಾರ ವಿಧಿಸಿರುವ 19 ಷರತ್ತುಗಳಲ್ಲಿ ಇದೂ ಒಂದು’ ಎಂದರು.