‘ತಮಿಳುನಾಡಿನ ಕಣನ್ ಎಂಬುವರನ್ನು ಶಾಂತಿ ಮದುವೆ ಆಗಿದ್ದರು. ದಂಪತಿ, ತಮ್ಮಿಬ್ಬರು ಮಕ್ಕಳ ಜೊತೆ ಲಕ್ಷ್ಮಣ ನಗರದಲ್ಲಿ ನೆಲೆಸಿದ್ದರು. ಪತಿ ಕಣನ್, ಖಾಸಗಿ ಕಂಪನಿಯೊಂದರ ಕಾವಲುಗಾರ. ಶಾಂತಿ, ಮಲ್ಲೇಶ್ವರದ ಹಳ್ಳಿ ಮನೆ ಹೋಟೆಲ್ನಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಮಗ ಸಂತೋಷ್, ಕೋರಮಂಗಲದ ದ್ವಿಚಕ್ರ ವಾಹನ ಶೋರೂಂನಲ್ಲಿ ಮೆಕ್ಯಾನಿಕ್ ಆಗಿದ್ದರು. ಮಗಳು ರೂಪಾ, ಪ್ರಥಮ ಪಿಯುಸಿ ಓದುತ್ತಿದ್ದರು’ ಎಂದು ಶ್ರೀರಾಮಪುರ ಪೊಲೀಸರು ಹೇಳಿದರು.