‘ಏ.16ರ ಬೆಳಿಗ್ಗೆ 10.30ರ ಸುಮಾರಿಗೆ ಜಯನಗರದ ‘ರಿಲಯನ್ಸ್ ಡಿಜಿಟಲ್ ಸ್ಟೋರ್’ಗೆ ತೆರಳಿದ್ದ ಅಕ್ಕ, 12.15ಕ್ಕೆ ವಾಟ್ಸ್ಆ್ಯಪ್ನಲ್ಲಿ ಕ್ರಿಮಿನಾಶಕದ ಬಾಟಲಿಯ ಫೋಟೊ ಕಳುಹಿಸಿದ್ದಳು. ‘ನನಗೆ ಬದುಕಲು ಆಗುತ್ತಿಲ್ಲ. ನನ್ನಿಂದ ಎಲ್ಲರೂ ನೋವು ತಿನ್ನುವಂತಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಂದೇಶ ಕಳುಹಿಸಿದ್ದಳು. ತಕ್ಷಣ ಕರೆ ಮಾಡಿ ಸಾಂತ್ವನದ ಮಾತುಗಳನ್ನು ಹೇಳಿದೆ. ಸ್ವಲ್ಪ ಸಮಯದಲ್ಲೇ ಅಕ್ಕನ ಮೊಬೈಲ್ ಸ್ವಿಚ್ಡ್ಆಫ್ ಆಯಿತು.’