ಬೆಂಗಳೂರು: ‘ಪ್ರಕೃತಿಸಂರಕ್ಷಣೆ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮೈಗೂಡಿಸಿಕೊಳ್ಳಲು ನೆರವಾಗಲಿದೆ’ ಎಂದು ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿಅನಂತ್ ಕುಮಾರ್ ಅಭಿಪ್ರಾಯಪಟ್ಟರು.
ಹನುಮಂತನಗರದ ಬಾಲಾಜಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಿ ಅವರು ಮಾತನಾಡಿದರು.
‘ಮನುಷ್ಯನ ಜೀವನದಲ್ಲಿಅನ್ನ, ಅಕ್ಷರ ಮತ್ತು ಆರೋಗ್ಯ ಎಷ್ಟು ಮುಖ್ಯವೋ, ಅದೇ ರೀತಿ ಸಂಸ್ಕೃತಿ ಹಾಗೂ ಪ್ರಕೃತಿ ಮುಖ್ಯ. ಆದ್ದರಿಂದ ಪರಿಸರಸಂರಕ್ಷಣೆಗೆ ಆದ್ಯತೆ ನೀಡಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟುಕೊಡಬೇಕು’ ಎಂದು ಹೇಳಿದರು.
‘ಅದಮ್ಯ ಚೇತನ ಸಂಸ್ಥೆಯಿಂದ ಪ್ರತಿ ಭಾನುವಾರ ಗಿಡನೆಡುವಕಾರ್ಯಕ್ರಮಹಮ್ಮಿಕೊಳ್ಳುತ್ತಿದೆ.ಹಸಿರುಭಾನುವಾರ ಕಾರ್ಯಕ್ರಮದಮೂಲಕ ಈಗಾಗಲೇ ಸಾವಿರಾರು ಗಿಡಗಳನ್ನುನೆಡಲಾಗಿದೆ’ ಎಂದರು.