ಕಳೆದ ವರ್ಷ ಆಕಾಶವಾಣಿ ನಡೆಸಿದ ಪರೀಕ್ಷೆಯಲ್ಲಿ ಪ್ರೇಮಲತಾ ಭಾಗವಹಿಸಿದ್ದರು. ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಕನ್ನಡ ಸುಗಮ ಸಂಗೀತದ ಭಾವಗೀತೆ ಗಾಯಕರಲ್ಲಿ ಉನ್ನತ ಶ್ರೇಣಿ ಪಡೆದವರಲ್ಲಿ ಪ್ರೇಮಲತಾ ಕೂಡಾ ಒಬ್ಬರು. ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಜಿ.ಕೆ.ರವೀಂದ್ರಕುಮಾರ್ ಪ್ರಮಾಣಪತ್ರ ವಿತರಿಸಿದರು.