‘ಸಂಜಯ್ ಗಾಂಧಿ, ಕಿದ್ವಾಯಿ, ನಿಮ್ಹಾನ್ಸ್, ಜಯದೇವ ಸಂಸ್ಥೆಗಳು ಸಾಕಷ್ಟು ಉಪಯುಕ್ತ ಸೌಲಭ್ಯಗಳನ್ನು ಹೊಂದಿವೆ. ಹೀಗಿದ್ದರೂ ಜನತಾ ದರ್ಶನದಲ್ಲಿ ಬಹಳಷ್ಟು ರೋಗಿಗಳು ನಮ್ಮ ಬಳಿ ಬಂದು ಸಹಾಯ ಕೇಳುತ್ತಾರೆ. ಕಿಡ್ನಿ ಕಸಿ ಸೇರಿದಂತೆ ಆರೋಗ್ಯದ ಸಮಸ್ಯೆಗಳಿಗೆ ಹಣ ನೀಡಲಾಗದ ಸ್ಥಿತಿಯಲ್ಲಿ ಬಡವರು ಇದ್ದಾರೆ. ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತು ಟ್ರಾಮಾ ಕೋರ್ಸ್ನಲ್ಲಿ ಚರ್ಚೆಯಾಗಲಿ’ ಎಂದು ಅವರು ಹೇಳಿದರು.