ಬಳಿಕ ಮಾತನಾಡಿದ ಅವರು,‘ಕುಷ್ಠರೋಗವನ್ನು 2020 ವೇಳೆಗೆ ಸಂಪೂರ್ಣವಾಗಿ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆ ಬದ್ಧವಾಗಿದೆ. ಕುಷ್ಠರೋಗದಿಂದ ಅಂಗವಿಕಲತೆ ಆಗದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಬೆಂಗಳೂರು ನಗರದಿಂದ ಆರಂಭ ಮಾಡಲಾಗಿದೆ. ಅಶಾ, ಅಂಗನವಾಡಿ, ಹಾಗೂ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರ ಮನೆಮನೆಗೆ ತೆರಳಿ ಕುಷ್ಠರೋಗದ ಚಿಹ್ನೆಗಳಿದ್ದಲ್ಲಿ ಗುರುತಿಸಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಕೊಡಿಸಿದರೆ ಈ ರೋಗ ಗುಣಪಡಿಸಬಹುದು. ಬೆಂಗಳೂರು ನಗರದಲ್ಲಿ 3,850 ತಂಡಗಳನ್ನು ರಚಿಸಲಾಗಿದ್ದು, 7,550 ಜನ ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದರು.