‘ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಜಯ್, ಕನ್ನಡ ಪರ ಸಂಘಟನೆಯೊಂದರ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ. ಅದೇ ಸಂಘಟನೆಯಲ್ಲಿ ಸುನೀಲ್ ಸಹ ಗುರುತಿಸಿಕೊಂಡಿದ್ದ. ಅಲ್ಲದೆ, ಹತ್ಯೆಗೂ ಕೆಲ ದಿನಗಳ ಮುನ್ನ ಇಬ್ಬರೂ ತುಮಕೂರಿನ ಹೋಟೆಲ್ವೊಂದರಲ್ಲಿ ಕುಳಿತು ಮಾತುಕತೆ ನಡೆಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.