‘ಶರಣ ಸಮಾಜ ಇಂದು ಅನ್ಯ ಧರ್ಮಗಳ, ತತ್ವ, ಆಚರಣೆಗಳ ಪ್ರಭಾವಕ್ಕೆ ಒಳಗಾಗಿ ಶರಣರು ಕೊಟ್ಟು ಹೋದ ತನ್ನ ಸತ್ಯಶುದ್ಧ ನಿಜಾಚರಣೆ, ನಿಜ ತತ್ವ ಮರೆತು ವಿಸ್ಮೃತಿಗೆ ಒಳಗಾಗಿದೆ. ಅದಕ್ಕೆ ಅರಿವು ಮೂಡಿಸಿ ಸರಿದಾರಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಇದಕ್ಕಾಗಿಯೇ ಡಾ. ಎಂ.ಎಂ. ಕಲಬುರ್ಗಿ ಅವರು ಶರಣ ಸಮಾಜದ ಶುದ್ಧೀಕರಣ, ಏಕೀಕರಣ, ನವೀಕರಣ, ಜಾಗತೀಕರಣ ಹಾಗೂ ಸಬಲೀಕರಣ ಎಂಬ ಸೂತ್ರವನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ಸಮಾಜದ ಬಲವರ್ಧನೆ ಕಾರ್ಯದಲ್ಲಿ ತೊಡಗಬೇಕು’ ಎಂದು ಅವರು ಹೇಳಿದರು.