ಹೆಸರಘಟ್ಟ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ₹25 ಲಕ್ಷ ಅನುದಾನದಲ್ಲಿ ಸಾಸುವೆಘಟ್ಟ ಮತ್ತು ಹೆಸರಘಟ್ಟ ಗ್ರಾಮದಲ್ಲಿ ನಿರ್ಮಿಸುತ್ತಿರುವ ನೀರು ಶೇಖರಣಾ ತೊಟ್ಟಿಯ ಕಾಮಗಾರಿಗೆ ಯಲಹಂಕ ಶಾಸಕ ಎಸ್.ಅರ್.ವಿಶ್ವನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘ಹೆಸರಘಟ್ಟ ಗ್ರಾಮದಲ್ಲಿ ನೀರಿನ ಬೇಡಿಕೆ ಹೆಚ್ಚುತ್ತಿದೆ. ಮಳೆಯು ಹೋದ ವರ್ಷ ಕೈ ಕೊಟ್ಟಿರುವುದರಿಂದ ನೀರಿನ ಆಭಾವ ಕಾಡುತ್ತಿದೆ. ಇರುವ ನೀರಿನ ಮೂಲವನ್ನು ಸಂಗ್ರಹಿಸಿ ಜನರಿಗೆ ತಲುಪಿಸಬೇಕಾಗಿದೆ’ ಎಂದು ಹೇಳಿದರು.