ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಮೊದಲ ಎರಡು ಪ್ರಶಸ್ತಿ ಗೆದ್ದು ಬೀಗಿದ ವೆಸ್ಟ್ ಇಂಡೀಸ್ ಆಟ ಕಣ್ಣಿಗೆ ಕಟ್ಟುತ್ತದೆ. ಅದೇ ವಿಂಡೀಸ್ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಟೂರ್ನಿ ಆಯೋಜಿಸುವ ಅವಕಾಶ ಪಡೆದಿದ್ದು 2007ರಲ್ಲಿ.
ಆದರೆ ಆ ಟೂರ್ನಿಯು ವಿಂಡೀಸ್ ಮತ್ತು ವಿಶ್ವದ ಕ್ರಿಕೆಟ್ಪ್ರೇಮಿಗಳ ಹಲವು ಅಚ್ಚರಿಯ ಫಲಿತಾಂಶಗಳ ಜೊತೆಗೆ ಕಹಿನೆನಪುಗಳನ್ನೂ ನೀಡಿದ್ದು ದುರಂತ. ಪಾಕಿಸ್ತಾನ ಕೋಚ್ ಬಾಬ್ ವೂಲ್ಮರ್ ಕೊಲೆ ಕ್ರಿಕೆಟ್ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯಿತು.
l ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡವು ಟೂರ್ನಿಯ ಬಿ ಗುಂಪಿನಲ್ಲಿ ಆಡಿತು. ಈ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಬರ್ಮುಡಾ ತಂಡಗಳು ಇದ್ದವು.
l 2003ರಲ್ಲಿ ಫೈನಲ್ ತಲುಪಿದ್ದ ಭಾರತ ತಂಡವು ವಿಂಡೀಸ್ನಲ್ಲಿ ಲೀಗ್ ಹಂತದಲ್ಲಿಯೇ ಸೋತು ಹೊರಬಿದ್ದಿತು.
l ಭಾರತ ತಂಡದಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ ಮತ್ತು ಅನಿಲ್ ಕುಂಬ್ಳೆ ಇದ್ದರು.
l ವಿಕೆಟ್ಕೀಪರ್ ಮಹೇಂದ್ರಸಿಂಗ್ ಧೋನಿ ಆಡಿದ ಮೊದಲ ವಿಶ್ವಕಪ್ ಟೂರ್ನಿ ಇದಾಗಿತ್ತು.