ಬಳಿಕ ಮಾತನಾಡಿದ ಯಶ್,‘ಸರ್ಕಾರಗಳಿಗೆ ಪರಿಸರ ಸಂರಕ್ಷಣೆ ಮುಖ್ಯವಾಗುವುದಿಲ್ಲ. ಬೇಡವಾದ ಕೆಲಸಗಳಲ್ಲಿ ತೊಡಗಿರುತ್ತವೆ. ಆದ ಕಾರಣ ಜನರೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕು.ಮನುಷ್ಯ ಸತ್ತ ಮೇಲೆ ತನ್ನನ್ನು ಸುಡಲಾದರೂ ಎರಡು ಮರ ಬೆಳೆಸಬೇಕು. ತಮ್ಮಮಕ್ಕಳನ್ನು ಬೆಳೆಸುವ ರೀತಿ ಮರಗಳನ್ನೂ ಪೋಷಕರುಪಾಲನೆ ಮಾಡಬೇಕು’ ಎಂದು ಹೇಳಿದರು.