ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ ಬರೆಯಿರಿ ಪ್ರಯಾಣದ ಅವಕಾಶ ಗೆಲ್ಲಿರಿ

Last Updated 18 ಮೇ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣವು ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ನಿಲ್ದಾಣದ 50 ವರ್ಷಗಳ ಸಂಪೂರ್ಣ ಇತಿಹಾಸದ ಲೇಖನ, ಕತೆಗಳನ್ನು ನಾಗರಿಕರಿಂದ ಆಹ್ವಾನಿಸಲಾಗಿದೆ.‌

ಈ ನಿಲ್ದಾಣದ ಹುಟ್ಟು, ವಿಕಸನ, ಸುದೀರ್ಘ ಪಯಣದ ಬಗ್ಗೆ ಮೌಲ್ಯಾಧಾರಿತ ಮತ್ತು ಅಧಿಕೃತ ಮಾಹಿತಿ, ಇತಿಹಾಸ, ಕತೆಗಳು, ಲೇಖನಗಳಲ್ಲಿ ಸಂಪೂರ್ಣವಾಗಿ ವಿವರಿಸಬೇಕು. ಅದರ ಚಿತ್ರಗಳನ್ನು ಒದಗಿಸಬೇಕು.

‘ವಿಜೇತರಿಗೆ ಕೆಎಸ್‌ಆರ್‌ಟಿಸಿಯ ಅಂಬಾರಿ ಡ್ರೀಮ್‌ ಕ್ಲಾಸ್‌–ಮಲ್ಟಿ ಆಕ್ಸೆಲ್‌ ಸ್ಲೀಪರ್‌ ಬಸ್‌ನಲ್ಲಿ ಎರ್ನಾಕುಲಂ, ಪುಣೆ, ಸಿಕಂದರಾಬಾದ್‌, ವಿಜಯವಾಡಕ್ಕೆ (ಯಾವುದಾದರೂ ಒಂದು ಸ್ಥಳಕ್ಕೆ ಮಾತ್ರ) ಹೋಗಿ–ಬರುವ ಪ್ರಯಾಣಕ್ಕೆ ಉಚಿತ ಟಿಕೆಟ್‌ ನೀಡಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

ಲೇಖನದ ವಿವರಗಳನ್ನು ‌pro@ksrtc.org,ಫೇಸ್‌ಬುಕ್‌ (Facebook/KSRTC.karnataka), ಟ್ವಿಟರ್‌ನಲ್ಲಿ (Twitter/KSRTC_journys) ಇದೇ 25ರ ಒಳಗೆ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT