ಯಲಹಂಕ: ವಾಯುನೆಲೆಗೆ ಸಮೀಪದ ಬಾಗಲೂರಿನಲ್ಲಿರುವ ಮಾವಳ್ಳಿಪುರ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಖಾಸಗಿ ನೀಲಗಿರಿ ತೋಪು ಸೇರಿದಂತೆ ಸುಮಾರು 30 ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಸಿ.ಆರ್.ಪಿ.ಎಫ್ ಹಿಂಭಾಗ ಮೈಲಪ್ಪನಹಳ್ಳಿ, ಆರ್.ಟಿ.ಒ. ಕಚೇರಿ ರಸ್ತೆಗೆ ಹೊಂದಿಕೊಂಡಂತಿರುವ ಜಾರಕಬಂಡೆ, ವೀರಸಾಗರ ಅರಣ್ಯ ಪ್ರದೇಶ ಸೇರಿದಂತೆ ಮೂರು ಕಡೆಗಳಲ್ಲಿ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸಮಯ ಬೆಂಕಿ ಕಾಣಿಸಿಕೊಂಡಿದೆ.ತರಗೆಲೆಗಳಿಗೆ ಬಿದ್ದ ಬೆಂಕಿ ಕ್ಷಣಾರ್ಧದಲ್ಲೇ ಸುತ್ತಮುತ್ತ ವ್ಯಾಪಿಸಿದೆ. ಶಿವಕೋಟೆಯ ವೀರಭದ್ರಪ್ಪ ಅವರ ನೀಲಗಿರಿ ತೋಟ ಸುಟ್ಟುಹೋಗಿದೆ.