ಇಲ್ಲಿನ ಆಂಜನೇಯ ನಗರ ನಿವಾಸಿ, ಗೌಂಡಿ ಕೆಲಸ ಮಾಡುತ್ತಿದ್ದ ಅಂಕಲೇಶ್ ಅರ್ಜುನ್ ಖೋತ (21) 2018ರ ಮೇ 31ರಂದು ಬೆಳಿಗ್ಗೆ ಅಥಣಿ ತಾಲ್ಲೂಕಿನ ಗಡಿಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ತನಂಗ್ ಬಳಿ ಮೃತಪಟ್ಟಿದ್ದರು. ಸ್ನೇಹಿತನ ಜೊತೆ ಬೈಕ್ನಲ್ಲಿ ಹಿಂಬದಿ ಸವಾರನಾಗಿ ಹೋಗುವಾಗ ಖಾಸಗಿ ಬಸ್ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ಅಂಕಲೇಶ್ ಮರು ದಿನ ಮೃತಪಟ್ಟಿದ್ದರು.