60 ವರ್ಷ ವಯಸ್ಸಿನ ಚಂದ್ರೇಗೌಡ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.ಹಂದಿಗೋಡು ಚಂದ್ರೇಗೌಡ ಬುಧವಾರ ರಾತ್ರಿ ಕೀಟನಾಶಕ ಸೇವಿಸಿದ್ದರು. ಅವರ 1 ಎಕರೆ 30 ಗುಂಟೆ ಭತ್ತದ ಗದ್ದೆ ಸಂಪೂರ್ಣ ನಾಶವಾಗಿತ್ತು. ಒಂದು ಎಕರೆ ಕಾಫಿ ತೋಟ ಕೂಡ ಅತಿವೃಷ್ಟಿಯಿಂದಾಗಿ ಹಾನಿಗೆ ಒಳಗಾಗಿತು. ಇದರಿಂದ ಬೇಸತ್ತಿದ್ದ ಅವರು ಕೀಟನಾಶಕ ಸೇವಿಸಿದ್ದರು. ಕಳಸ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.