ಇಸ್ಲಾಮಾಬಾದ್: ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಪ್ರಕ್ಷುಬ್ಧಗೊಂಡಿದೆ. ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಅಧಿಕಾರವನ್ನು ಭಾರತದ ಪ್ರಧಾನಿ ಮೋದಿ ಸೇನೆಗೆ ಕೊಟ್ಟಿದ್ದಾರೆ. ಅದರ ಬೆನ್ನಿಗೇ, ಭಾರತ ಯಾವುದೇ ‘ದುಸ್ಸಾಹಸ’ಕ್ಕೆ ಕೈಹಾಕಿದರೆ ತಕ್ಕ ಉತ್ತರ ಕೊಡುವಂತೆ ಪಾಕಿಸ್ತಾನ ಸೇನೆಗೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಕೊಟ್ಟಿದ್ದಾರೆ.