ಪುದುಚೇರಿ: ಎಐಎಡಿಎಂಕೆ ಶಾಸಕರು ಲೆಪ್ಟಿನೆಂಟ್ ಗವರ್ನರ್ ಅವರನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿಧಾನಸಭೆಯಿಂದ ಬುಧವಾರ ಹೊರ ನಡೆದರು.
ಪುದುಚೇರಿಯಲ್ಲಿ ಮಳೆಗಾಲದ ಅಧಿವೇಶನ ಆರಂಭವಾಗಿದ್ದು ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಸದನದಲ್ಲಿ ವಿವಿಧ ಅಭಿವೃದ್ಧಿಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಸರ್ಕಾರ ಮತ್ತು ಲೆಪ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ನಡುವಿನ ಸಂಘರ್ಷ ದೇಶದ ಗಮನ ಸೆಳೆದಿದೆ.
Puducherry: MLAs of All India Anna Dravida Munnetra Kazhagam (AIADMK) staged a walkout from the Puducherry Assembly demanding Center to freeze the government in the union territory & removal of deputy governor. pic.twitter.com/VSeMSGVzZX
ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಶಾಸಕರು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರವನ್ನು ಮತ್ತಷ್ಟು ಸದೃಢಗೊಳಿಸಬೇಕು ಹಾಗೂ ಲೆಪ್ಟಿನೆಂಟ್ ಗವರ್ನರ್ ಅವರನ್ನು ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಸದನದಿಂದ ಹೊರ ನಡೆದರು.
ಕೆಲ ಹೊತ್ತು ಸದನದ ಹೊರಗೆ ಫಲಕಗಳನ್ನು ಲೆಪ್ಟಿನೆಂಟ್ ಗವರ್ನರ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.